Kagga Logo

Third eye

694

698

694

ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು ।
ಸಂಧಿಪುದು ಕಡಲನೀರ್ಗಳನ್; ಅಂತು ಜೀವನ್ ॥
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ ।
ಸಂದರುಶಿಪನು ಪರನ - ಮಂಕುತಿಮ್ಮ ॥ ೬೯೪ ॥

ಹೇಗೆ ಕೆರೆ ತುಂಬಿ ಹರಿಯುವ ನೀರು ತನಗೊಡ್ದುವ ಅಡ್ಡಿಗಳೆಲ್ಲವನ್ನೂ ದಾಟಿ, ಹರಿದು, ತನ್ನ ಗಮ್ಯವಾದ ಕಡಲನ್ನು ಸೇರುವಂತೆ, ಜೀವನೂ ಸಹ ಪರತತ್ವದ ಮೇಲೆ ಕಣ್ಣಿಟ್ಟು, ಅದನ್ನು ಸೇರುವ ಆತುರದಿಂದ, ಅದನ್ನು ಅರಿಯಲು ಇಂದ್ರಿಯಗಳು ಒಡ್ಡಿದ ಮತ್ತು ಒಡ್ಡಬಹುದಾದ ಎಲ್ಲ ಅಡ್ಡಿಗಳನ್ನೂ ದಾಟಿ ಪರತತ್ವದ ದರ್ಶನವನ್ನು ಪಡೆಯುತ್ತದೆ ಎಂದು ನಿಖರವಾಗಿ ಉಲ್ಲೇಕ್ಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

The flood water from the stream (pond) will break all barriers and flow out towards the ocean to become one with the water of the sea. Just like that our individual souls will break the boundaries (limitations) of senses and become one the cosmic truth only when we let our vision go beyond the sensory world." - Mankutimma

695

ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- ।
ನೊಂದರಿಂ ಮಾಯೆಯಾಟವ ಮೀರುವಂತೆ ॥
ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ ।
ಸಂಧಾನವನು ಗಳಿಸೊ - ಮಂಕುತಿಮ್ಮ ॥ ೬೯೫ ॥

ಕೋಟ್ಯಾಂತರ ದ್ವಂದ್ವಗಳಿಂದ ಕೂಡಿದ ಈ ಲೋಕವನ್ನು ತನ್ನೆರಡು ಕಣ್ಣುಗಳಿಂದ ನೋಡುತ್ತಾ ಕಾಪಾಡಿ, ಮಾಯೆಯಾಟದಿಂದ ಉಂಟಾಗುವಕಾಮನನ್ನು ಅಥವಾ ಮನ್ಮಥನನ್ನು ತನ್ನ ಮೂರನೆಯ ಕಣ್ಣಿಂದ, ಆ ಪರಮಶಿವ ಸುಟ್ಟಂತೆ, ಇಂದ್ರಿಯಗಳಿಗೆಟುಕದರ ದರ್ಶನಕೆ ನಿನ್ನಲ್ಲಿರುವ ವಿವೇಕದ ಅಥವಾ ಜ್ಞಾನದ ಕಣ್ಣನ್ನು ಮನಸ್ಸು ಬುದ್ಧಿಗಳೊಂದಿಗೆ ಅನುಸಂಧಾನ ಮಾಡಿಕೊ ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Lord Shiva is the ultimate example of the way this world has to be dealt with. He has two eyes using which he will preside over the wellbeing of the entire world. But for philosophical union with the cosmic truth, the has the third eye. With that he can perceive beyond the senses. In our lives, we have to find the balance between what can be seen with our eyes and what has to be experienced with eyes shut." - Mankutimma

696

ಶರಧಿಯನೀಜುವನು, ಸಮರದಲಿ ಕಾದುವನು ।
ಗುರಿಯೊಂದನುಳಿದು ಪೆರತೊಂದ ನೋಡುವನೆ? ॥
ಮರೆಯುವನು ತಾನೆಂಬುದನೆ ಮಹಾವೇಶದಲಿ ।
ನಿರಹಂತೆಯದು ಮೋಕ್ಷ - ಮಂಕುತಿಮ್ಮ ॥ ೬೯೬ ॥

ಕಡಲನ್ನು ಈಜುವವನು ಅಥವಾ ಯುದ್ಧದಲ್ಲಿ ಹೋರಾಡುವವನು ತನ್ನ ಗುರಿಯನ್ನು ಮಾತ್ರ ನೋಡುತ್ತಾನಲ್ಲದೆ ಬೇರೊಂದನ್ನು ನೋಡುವನೆ? ಆ ಸ್ಥಿತಿಯಲ್ಲಿ ಅವನಿಗಿರುವ ಮಹಾ ಆವೇಶದಲಿ ಅವನು ತನ್ನನ್ನೇ ತಾನು ಮರೆತು ಈಜುತ್ತಾನೆ ಅಥವಾ ಹೋರಾಡುತ್ತಾನೆ. ಹಾಗೆಯೇ ಪರತತ್ವವನು ಅರಿಯಲು ಇಚ್ಚಿಸುವವನು ‘ಅಹಂ’ಕಾರವನ್ನು ಮರೆತು, ತೊರೆದು ಏಕದೃಷ್ಟಿಯಿಂದ ಮುನ್ನಡೆದಾಗ ಅವನಿಗೆ ಮೋಕ್ಷವುಂಟಾಗುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Man does many things to achieve the magnanimous - he swims across oceans, fights in wars and so on. In his quest, he does not see anything other than the goal. He forgets himself in pursuit of his quest. When the self gets dissolved, it is called Moksha (realization)." - Mankutimma

697

ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? ।
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ॥
ಮತ್ತುಮತ್ತನುವರ್ತಿಸುತ, ಭಂಗವಾದಂದು ।
ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ॥ ೬೯೭ ॥

ಪರತತ್ವವನ್ನು ಕಂಡುಕೊಳ್ಳಲು ನಾವು ‘ನಿರಹಂತೆ’ ಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಂದಿನ ಮುಕ್ತಕದಲ್ಲಿ ಅರಿತೆವು. ಆದರೆ ‘ನಿರಹಂತೆ’ ಒಳ್ಳೆಯದು ಎಂದು ಕೇವಲ ಬುದ್ಧಿಗೆ ಅವಗಾಹನೆಯಾದರೇನು ಫಲ. ಅದನ್ನು ನಾವು ಕಾರ್ಯರೂಪಕ್ಕೆ ತಂದು, ಅದು ನಮ್ಮ ಸ್ವಭಾವವಾಗಲು ನಮ್ಮ ಪ್ರಯತ್ನಗಳಿಗೆ ತೊಡಗುಗಳು ಬಂದರೆ, ಅದನ್ನು ನಮ್ಮ ಸ್ವಾಭಾವವಾಗಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನವನ್ನು ಮಾಡು ಎಂದು ಆದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

It is not enough if the mind can know what is the righteous thing to do. One has to put it to practice in daily life again and again so that it becomes his nature. If it is broken for some reason, then start again." - Mankutimma

698

ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು ।
ನಡೆಯ ಕಲಿತವನು? ಮತಿನೀತಿಗತಿಯಂತು ॥
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- ।
ದಡವಿಕೊಳುವವರೆಲ್ಲ - ಮಂಕುತಿಮ್ಮ ॥ ೬೯೮ ॥

ನಡೆಯಲು ಪ್ರಯತ್ನಪಡುವ ಪ್ರತಿಯೊಂದು ಮಗುವೂ ತಡವರಿಸಿ, ಎಡವಿ, ಮುಗ್ಗರಿಸಿ, ಬಿದ್ದು ತಾನೇ ನಡೆಯುವುದನ್ನು ಕಲಿಯುವುದು. ಮಗು ಹೇಗೆ ಮತ್ತೆ ಮತ್ತೆ ಬಿದ್ದರೂ ಮೈದಡವಿಕೊಂಡು, ಮೇಲೆದ್ದು ನಡೆಯುವಂತೆ, ರೀತಿ, ನೀತಿಯನ್ನು, ಧರ್ಮ ಮಾರ್ಗವನ್ನು, ಬದುಕಿನ ತತ್ವವನ್ನು ಮತ್ತು ಪರತತ್ವನ್ನರಿಯಲು ಪ್ರಯತ್ನಿಸುವ ಪ್ರತಿಯೊಬ್ಬರೂ ಅಡೆ ತಡೆ ಎದುರಾದರೂ ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಾರೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Is there any child that has learned to walk without ever having tripped, without breaking open a wound? Similar is the story of wisdom. One does err (and get hurt), regain composure - shake it off and continue. Troubles and setbacks are natural." - Mankutimma