Kagga Logo

Firewood

924

928

924

ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ ।
ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ॥
ಬಣಗು ಕುರಿಚಲು ಗಿಡದ ಬಾಳೇನು? ನೀನಂತು ।
ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ॥ ೯೨೪ ॥

ನೀನು ಒಂದು ಕುರಿಚಲು ಗಿಡವಿದ್ದಂತೆ. ಹೇಗೆ ಕುರಿಚಲು ಗಿಡ, ಯಾವ ಮನೆಯ ಮಾಳಿಗೆಗೆ ತೊಲೆಯೋ, ಧೂಲವೋ ಆಗುವುದಿಲ್ಲವೋ ಅಥವಾ ಯಾರ ಮುಡಿಗೂ ಅಂದ ಮತ್ತು ಸುಗಂಧವನ್ನೀಯುವ ಹೂಗಳನ್ನು ಅರಳಿಸುವುದಿಲ್ಲವೋ ಅಥವಾ ರುಚಿಯಾದ ಹಣ್ಣೋ ಅಥವಾ ಅಹಾರವಾಗಬಹುದಾದ ಧಾನ್ಯವನ್ನೋ ಕೊಡುವುದಿಲ್ಲವೋ ಹಾಗೆಯೇ ನಿನ್ನ ಜೀವನವೂ ಸಹ, ನಿಷ್ಪ್ರಯೋಜಕ. ಹೇಗೆ ಕುರಿಚಲು ಗಿಡ ಒಣಗಿದರೆ ಕೇವಲ ಒಲೆಗೆ ಒಡ್ಡಲು ಸೌದೆಯಾಗಬಹುದೋ ಅದೇ ರೀತಿ ನೀನು ಎಂದು, ನಮ್ಮೆಲ್ಲರ ಬದುಕಿನ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.

It is not used for making roof for the house. It has no flowers that a lady can wear on her head. It does not have sweet fruits, neither juicy nuts. The garden weed is thus utterly useless. You are just like that. Once dried (dead), just equivalent to firewood. - Mankutimma

925

ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು ।
ಹೇಳುತ್ತ ಹಾಡುಗಳ, ಭಾರಗಳ ಮರೆತು ॥
ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ ।
ಬಾಳ ನಡಸುವುದೆಂದೊ?- ಮಂಕುತಿಮ್ಮ ॥ ೯೨೫ ॥

ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಒಂದು ವಿರಕ್ತಭಾವದ ಆಶಯವನ್ನು ಹೊತ್ತು, ತಮಗೆ ತಾವೇ, "ನೀನು, ಕಷ್ಟ ಸುಖಗಳ ಗೆರೆಯನ್ನು ದಾಟಿದ ಮನಸ್ಸನ್ನು ಹೊಂದಿದ ಜೋಗಿಯಂತೆ, ಜೋಳಿಗೆಯನು ಹಿಡಿದು, ಊರಿಂದ ಊರಿಗೆ ಹಾಡುತ್ತಾ, ಬದುಕಿನ ಭಾರವನು ಮರೆತು ಬಾಳನ್ನು ನಡೆಸುವುದು ಎಂದೋ?" ಎಂದು ಕೇಳಿಕೊಳ್ಳುತ್ತಾ, ಅಂತಹ ಮುಕ್ತ ಭಾವದ ಬದುಕನ್ನು ನಡೆಸಿದರೆ ಚೆನ್ನ ಎನ್ನುವಂತಹ ಸಂದೇಶವನ್ನು ನಮಗೂ ನೀಡಿದ್ದಾರೆ.

When will start living like a mendicant - having just a carry bag as a possession, going from town to town, singing songs, forgetting about burdens, letting the joys and griefs not affect your mind? That day, you will be truly happy. - Mankutimma

926

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ ।
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ॥
ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ ।
ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ॥ ೯೨೬ ॥

ಮನಸ್ಸು ಬರಡಾದಂದು, ಮನದ ಹೊಲಸನ್ನು ತೊಳೆಯಲು ಶಕ್ತಿ ಕುಗ್ಗಿದರೆ, ಜಗಕ್ಕೆ ಮತ್ತು ಜಗದ ಜನರಿಗೆ ಭಾರವಾಗದೆ, ಮನೆ ಬಿಟ್ಟು ದೂರ ಯಾರಿಗೂ ಹೊರೆಯಾಗದ ಹಾಗೆ ಹೊರಟು ಬಿಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

One must leave his house when he stops feeling for the house, when he does not have the strength to clean up the mess. He must leave the world. He must never become a burden to the world. he must go away and disappear so that the world does not even remember him. - Mankutimma

927

ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ ।
ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ॥
ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ ।
ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ॥ ೯೨೭ ॥

ಯಾರೂ ಇಲ್ಲದ ಕಡೆಗೆ, ಸಾವಿನೆಡೆಗೆ ತೊಲಗು. ಯಾರಿಂದಲೂ ಪ್ರೀತಿ ಒಲವು ಬಯಸದ ಮತ್ತು ದುಃಖವಿಲ್ಲದ ಸ್ಥಿತಿಯಲ್ಲಿ ನಿನ್ನ ಮನಸ್ಸನ್ನು ಲಯಗೊಳಿಸು. ಮೌನದಿಂದ ನೀನು ಅಂತಹ ಸ್ಥಿತಿಯಲ್ಲಿ ಮಲಗು ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Go to a place where there is no one. Go to the cemetery. Go to place where you will not get attached to. Go to a place where you will not feel sad. Dissolve your mind (into the soul of supreme conscious). Go and sleep there without even parting your lips. - Mankutimma

928

ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- ।
ಯಡವಿಯೊಳದೊಂದು ದೂರದ ಗವಿಯನೈದಿ ॥
ಬಿಡುವುದಾಯೆಡೆ ಮೌನದಿಂದಸುವನೆನ್ನುವರು ।
ಕಡೆಯ ಸಾರಂತು ನೀಂ- ಮಂಕುತಿಮ್ಮ ॥ ೯೨೮ ॥

‘ ಕಾಡಾನೆ ‘ ತನ್ನ ಮರಣ ಸನ್ನಿಹಿತವಾಯಿತೆಂದು ಮೊದಲೇ ಅರಿತು, ಕಾಡಿನಲ್ಲಿನ ಒಂದು ಗುಹೆಯೊಳಕ್ಕೆ ಸೇರಿ, ಮೌನವಾಗಿ ತನ್ನ ಉಸಿರನ್ನು ಬಿಡುವುದು ಎಂದು ಹೇಳುತ್ತಾರೆ. ನೀನೂ ಸಹ, ನಿನ್ನ ಅಂತ್ಯಕಾಲ ಹತ್ತಿರವಾದಾಗ, ಹಾಗೆ ದೂರ ಸರಿದು, ಮೌನವಾಗಿ ಕೊನೆಯುಸಿರನ್ನು ಬಿಟ್ಟು ಈ ಲೋಕದಿಂದ ಸರಿದು ಹೋಗು ಎಂದು, ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

They say a wild elephant knows its end time in advance. When it is time, it enters a far away cave in the forest and silently lets go of its life there. You should announce your end like that- by retreating from the world. - Mankutimma